ಬೆಂಗಳೂರಿನ ಕವಿತೆ

ಮೊದಲು ಆಕಾಶವಿತ್ತು,
ಆಕಾಶಕ್ಕೆ ಕಣ್ಣಿತ್ತು, ಕಿವಿಯಿತ್ತು
ಆದರೆ ಕಾಲುಗಳಿರಲಿಲ್ಲ
ಬ್ರಹ್ಮಾಂಡದ ಮೇಲೆ
ತೇಲಾಡುತ್ತಿತ್ತು

ಹಸುಗೂಸು-ಅಂಬೆಗಾಲಿಕ್ಕಿ ನೀನು ಬಂದೆ
ಜಗವೆಲ್ಲ ಖಾಲಿ ಇತ್ತು ನೀನು ಕಂಡೆ
ನಿನ್ನ ಕಣ್ಣುಗಳಲ್ಲಿ ಆಶ್ಚರ್ಯವಿತ್ತು,
ಹೊಳಪಿತ್ತು, ನಗುವಿತ್ತು, ಅಳುವಿತ್ತು
ನೀನು ತಂದೆ:

ಮೌನಕ್ಕೆ ಜೀವ ತುಂಬುವ ಅರ್ಥ
ನಿನ್ನ ಬಗೆಗಣ್ಣಲ್ಲಿ ನೂರಾರು ನವಿಲು
ಎಲ್ಲಾ ನವಿಲುಗಳು ಬಿಟ್ಟು ಹೋಗಿವೆ ತಮ್ಮ ನವಿಲುಗರಿ
ನಿನ್ನ ಹಣೆ ಮೇಲೆ ನಿಲ್ಲವುದೆ ಗರಿಯ ಗುರಿ ?
ತಿಳಿಯಲಿಲ್ಲ

ನೀನು ಹೊರಟೆ
ನಿನ್ನ ನಗು ಅಳೆದಿದ್ದು ಊರವಿಸ್ತಾರ
ನೀನು ಈಗಲೂ ನಗುವೆ.  ಯಾವ ಆರ್ಥ ?

ನೀ ಕಟ್ಟಿದೂರು ಇದು ಬೆಂಗಳೂರು
ಇಲ್ಲಿ ಕಾಮನ ಬಿಲ್ಲುಗಳಿವೆ ನವಿರಾಗಿ ನೆಡುವ
ನೂರಾರು ಮುಳ್ಳುಗಳಿವೆ ಇಲ್ಲಿ
ನಾನು ಬಂದೆ. ಇಲ್ಲಿ ನಾನು ಕಂಡೆ.
ತಿಳಿಯಬಾರದ್ದನ್ನೂ ತಿಳಿಯಬೇಕಾದ್ದನ್ನೂ
ತಿಳಿದುಕೊಂಡೆ.
ಈಗ ಹೇಳಿಬಿಡುವೆ

ಉದ್ಯಾನಗಳ ನಗರಿ-ನಿನ್ನ ಪ್ರೀತಿಸುವೆ
ನನ್ನ ಗೆಳೆಯರನೆಲ್ಲ ಕೈ ಮಾಡಿ ಕರೆವೆ
ಬೆಂಗಳೂರಿಗೆ ಬಾ ಬೆಂಗಳೂರಿಗೆ ಬಾ
ಬೆಂಗಳೂರೇ-ಒಮ್ಮೆ
ನನ್ನ ಊರಿಗೆ ಬಾ

ನಿನ್ನ ಮೈ ಸುಡುವ ಸೂರ್ಯ
ತನ್ನ ಮ್ಮೆ ತೊಳೆವ ಊರು
ಅವನ ಅವಿತಿಟ್ಟುಕೊಳುವ
ನನ್ನೂರ ವಿಸ್ತಾರ ಕಡಲು-
ನನ್ನೂರ ಅತಿಸಹಜ ಚೆಲುವು-
ಬೆಂಗಳೂರಿಗೆ ಬಾ ಬೆಂಗಳೂರಿಗೆ ಬಾ
ಬೆಂಗಳೂರೇ-ಒಮ್ಮೆ
ನನ್ನ ಊರಿಗೆ ಬಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪ್ಪಣೆ ಹಿಡಿದು ಹೆಜ್ಜೆ ಚಲ್ಲಿ
Next post ಅಲಾವಿ ಆಡುನು ಬಾ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys